Wednesday, June 15, 2011

ಎಲ್ಲಿಂದಲೋ ಬಂದವರು....



ಹೌದು ಇವರು ಎಲ್ಲಿಂದಲೋ ಬಂದವರು..
ಬಂದವರೇ ಮನಸನ್ನ ಆಕ್ರಮಿಸಿ ಬಿಡ್ತಾರೆ. ಅವರ ಮಾತು ಮಾತಿನ ಮೋಡಿ.. ನಗು ನಗುವಿನ ಅಂದ ಚೆಂದ ಮನಸೂರೆ ಮಾಡುತ್ತೆ.
ಹೀಗೆ ಬಂದವ ಸನುಶ್. ಬಂದವನೇ ಮನ ಕದ್ದು ಮಂಚದಲ್ಲಿ ಆಟವಾಡಿ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡು ಹೋದ. ಆದರು ಅವನ ಮಾತಿಗೆ.. ಮನಸಿಗೆ ಸೋತಿದ್ದ ನಾನು ಕಾಂಟಾಕ್ಟ್ ನಲ್ಲಿದ್ದೆ. ಮತ್ತೊಮ್ಮೆ ಹೀಗೆ ಚಾಟ್ ನಲ್ಲಿ ಸಿಕ್ಕಿದಾಗ...
 'I am in deep trouble. Please help me, argued with my parents and came from native to here. since yesterday i didn't have food yaar. If you give me some amount i will give back sure' ಎಂದ ನನ್ನ ಮನಸು ಕರಗಿತು. ಊಟ ಮಾಡಿಲ್ಲ ಎಂದು ಸರಿ "ಸಂಜೆ ಸಿಗು" ಎಂದೆ.
ಆ ಸಂಜೆ ಸಿಕ್ಕಿದ. ಅವನ ಮೊಗದಲ್ಲಿ ಹಿಂದಿನ ಕಳೆ, ಆಕರ್ಷಣೆ ಎಲ್ಲವೂ ಕಳೆದು ಹೋಗಿತ್ತು. ಅವನ ಧೈರ್ಯ ಸ್ಥೈರ್ಯ ಎಲ್ಲವು ಉಡುಗಿತ್ತೇನೋ. ಅವನಿಗೆ ಏನೋ ಕೇಳುವ ಆತುರ ಮನದಲ್ಲಿ ಏನೋ ಸಂಕೋಚ ಇತ್ತು. ಆದರು ಧೈರ್ಯ ಮಾಡಿ ಕೇಳಿದ 
"ನಾಳೆ ಮೈಸೂರು ನಲ್ಲಿ interview ಇದೆ. ಹೋಗೋದಿಕ್ಕೆ ಊಟಕ್ಕೆ ದುಡ್ಡಿಲ್ಲ, ಇದ್ದರೆ ಕೊಡು ಅಲ್ಲಿ ಕೆಲಸ ಸಿಕ್ಕ ಮೇಲೆ ಕೊಡ್ತೀನಿ" ಅಂದ. ಆಯ್ತು ಅಂತ ಅವನಿಗೆ ಹಣ ಕೊಟ್ಟೆ. ತೆಗೆದುಕೊಂಡು ಇಲ್ಲಿವರೆಗೆ ಎರಡು ವರ್ಷ ಆಗುತ್ತಾ ಬಂದಿತು. ಒಂದು ಕೃತಜ್ಞತೆಗಾಗಿ ಒಂದು ಸಂದೇಶ  ಇಲ್ಲ. ನನಗೆ ಆ ಹಣ ಏನು ಬೇಕಿಲ್ಲ ಒಂದೇ ಒಂದು ಸಂದೇಶ ಸಾಕಿತ್ತು ನನಗೆ. ಮನಸ್ಸು ಆ ನೋವನ್ನ ತಡೆಯಲು ಒಪ್ಪುತ್ತಿಲ್ಲ.
ಇದೆ ರೀತಿ suhassree ಹಾಗೆ ಮಾಡಿದ. ಕೊಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದರೆ ಆಗಿತ್ತು. ಚಾಟ್ ನಲ್ಲಿ ನಿಮ್ಮನ್ನ  block ಮಾಡಿ, ಬೇರೊಂದು ಹೆಸರಲ್ಲಿ ಶುರು ಮಾಡಿಕೊಂಡು, ಇನ್ನಿತರರ ವಂಚಿಸುತ್ತಿದ್ದಾರೆ.
ಕಷ್ಟದಲ್ಲಿ ಆದ ಗೆಳೆಯನನ್ನು ದುರುಪಯೋಗ ಪಡಿಸಿಕೊಂಡು ತಮ್ಮ "ಕೆಲಸವನ್ನ" ನಯವಾಗಿ ಮುಗಿಸಿಕೊಂಡು ಹೋಗುವ "ನಯವಂಚಕರ" ಬಗ್ಗೆ ಗೆಳೆಯರೇ ಹುಷಾರಾಗಿರಿ. ಯಾವುದೇ ವಿಷಯದಲ್ಲೂ ನಿಮ್ಮ ಖಾಸಗಿ ವಿಷಯಗಳನ್ನ ದಯವಿಟ್ಟು ಬಹುವಾಗಿ ಹಂಚಿಕೊಳ್ಳಬೇಡಿ.

ಹಾ !! ಇಲ್ಲೊಂದು ಉಪಸಂಹಾರ ಬೇಕು ಅನಿಸುತ್ತಿದೆ.
ನನಗೆ ಕೇಳಿಪಟ್ಟ ಹಾಗೆ ಕೆಲ ನಯವಂಚಕರು, ಗೆಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿ ಅಲ್ಲಿಂದ ಹೊರಡುವಾಗ ಅವರ ರೂಂ ನಲ್ಲಿರುವ ಮೊಬೈಲ್, ವಾಚ್, ಲ್ಯಾಪ್ ಟಾಪ್, ಹಣ ಹಾಗು ಇನ್ನಿತರ ಬೆಲೆಬಾಳುವ ವಸ್ತುಗಳನ್ನ ಕದ್ದು ಓಡಿದಂತ ಸುದ್ದಿ.
ಅಂತವರ ಬಗ್ಗೆ ಪೋಲಿಸ್ ಕಂಪ್ಲೈಂಟ್ ಕೊಡಲಾರದ ಸ್ಥಿತಿ.
ಹಾಗಾಗಿ ಅಂತವರ ಬಗ್ಗೆ ಹುಷಾರಾಗಿರಿ. ಎಷ್ಟೇ ಎಚ್ಚರವಿದ್ದರೂ ಅಂತವರು ಇದ್ದೆ ಇರುತ್ತಾರೆ. ಇಲ್ಲೂ ಮೋಸ , ದಗಾ ನಡೆಯುತ್ತಿದೆ. ಒಂದು ಒಳ್ಳೆಯ ಉತ್ತಮ ಸಂಪರ್ಕ ಏರ್ಪಡುತ್ತಿಲ್ಲ

ಮೋಸ ಮಾಡುವ ನಯವಂಚಕರೆ,
ನಿಮಗೂ ಹೃದಯ, ಮನಸ್ಸು ಇರಲಿ, ಇಲ್ಲಿ ಹಾಸಿಗೆ ಮೇಲೆ ನಡೆಯುವುದು ಒಂದು ಯಾಂತ್ರಿಕ ಕ್ರಿಯೆಯಲ್ಲ. ಅಸಹಜತೆಯಿಂದ ಸಹಜತೆಯಂತೆ ನಡೆಯುವ ಒಂದು ಕಾರ್ಯ. ಹಣ ಕೀಳುವ, ಕದ್ದೊಯ್ಯುವ ಚಾಳಿ ಬಿಡಿ. ಆ ಹಣ, ವಸ್ತು ಎಷ್ಟು ದಿನ ನಿಮ್ಮಲ್ಲಿ ಉಳಿಯುತ್ತೆ. ಆ ವಸ್ತು ನೋಡಿದಾಗೆಲ್ಲ ನಿಮ್ಮ ಮನಸಲ್ಲೂ "ಹೌದು, ನಾನು ಇದನ್ನ ಕದ್ದೆ". ಅಂತ ಅನಿಸೋಲ್ವೆ.
ಯಾರಿಂದಾದರೂ ಹಣ ತೆಗೆದು ಕೊಂಡಿದ್ದರೆ ಸಾಧ್ಯವಾದಷ್ಟು ಹಿಂತಿರುಗಿಸಿ ಕೊಡಲು ಪ್ರಯತ್ನಿಸಿ. ಇಲ್ಲವಾದಲ್ಲಿ "ಆಗುತ್ತಿಲ್ಲ, ಕ್ಷಮಿಸಿ " ಅಂತಾದರೂ ಹೇಳಿ. ಇನ್ನೊಬ್ಬರ ಸುಲಿಗೆ, ಬ್ಲ್ಯಾಕ್ ಮೇಲ್ ಖಂಡಿತ ಮಾಡಬೇಡಿ. 
ಇನ್ನೊಬ್ಬರ ಜೀವನದಲ್ಲಿ ಆಟವಾಡಬೇಡಿ. ಹಾಗೆ ಆದಲ್ಲಿ ನಿಮಗೂ ಬೀದಿ ಬದಿಯ ಸೂಳೆಗೂ ವ್ಯತ್ಯಾಸವೆಲ್ಲಿ. ?

2 comments:

  1. When we build a building, the foundation is laid with concrete..and there is soo much added in concrete like cement, stones..so on.
    and the same concrete is put as foundation and the taller the building the stronger the foundation is laid. and then allowed for weeks to get stronger and stiff.

    So love is like the same...its not easy to get it. but once you think you are getting it..we need to putin different things to make is strong and then finally lay it and wait for it to become stronger and stiff..and then start building..
    same wise, when you get someone and feel ..this is it.he is the one.
    Hold on your horses..give it time..let it go through all trials and tests..till then let it be a good friendship.
    once you realize after all trials and tests, thats the foundation is stronge, then build it.
    which means once the friendship goes through all trails and tests..but still exists..then propose your love and then build it on..
    in this course of time, you get to understand the other indivisual better and the vise versa.
    yeah course of time..time is something which cannot be predicted..one month, one year or even more..

    cheers
    Ridrob

    ReplyDelete

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...